ಕನ್ನಡಿಗರ ಅಚ್ಚು ಮೆಚ್ಚಿನ ಸಂಪತ್ ಕುಮಾರ್ ನಮ್ಮೆಲ್ಲರ ಪ್ರೀತಿಯ ದಾದ ಅಭಿನಯ ಭಾರ್ಗವ ವಿಷ್ಣು ವರ್ಧನ್ ಅವರ ಸ್ಮಾರಕ ಇಂದು ಮೈಸೂರಿನಲ್ಲಿ ಉದ್ಘಾಟನೆಯಾಗಿದೆ. ವಿಷ್ಣು ಸಾರ್ ಕನ್ನಡ ಚಿತ್ರರಂಗಕ್ಕೆ ನೀಡಿರುವ ಕೊಡುಗೆ ಅನನ್ಯ. ಈ ಕೊಡುಗೆಯನ್ನು ಸರ್ಕಾರ ಗಮನಿಸಿ ಈ ಸ್ಮಾರಕ ಮಾಡಿರುವುದು ಅಭಿನಂದನಾರ್ಹ. ಸ್ಮಾರಕ ಹಲವು ಹೊಸತನಗಳಿಗೆ ಸಾಕ್ಷಿಯಾಗಲಿ.